: ಸಖ್ಯಮೇಧ: ಜೊತೆ

March 13, 2015

ಜೊತೆ

ಕೆಂಪು ರಂಗೇರಿದೆ ಗಗನ
ತಂಪು ತಂಗಾಳಿಯ ಗಾನ
ಮಂಪರಿನ ಸವಿಸಂಜೆ ಯಾನ...
ಕಂಪೆರೆವ ಹಳೆನೆನಪ ಮನನ...
.
ಆಸರೆಗೆ ತರುಲತೆಗೆ ಮರವು ಇರಬೇಕು..
ಕುಸುಮಕ್ಕೆ ಭ್ರಮರದಾ ಸ್ಪರ್ಶವಿರಬೇಕು...
ನೇಸರನು ತೊಲಗಿದರೆ ಚಂದಿರನು ಬರಬೇಕು..
ಬೇಸರವು ಬಂದಾಗ ನಿನ್ನ ಜೊತೆ ಬೇಕು...
ಮಾಯಕದ # ಕೆಂಡಸಂಪಿಗೆ
. . . . . . ಸಖ್ಯಮೇಧ

No comments :

Post a Comment